UPLOAD

    310

    Food -Final

    Published: May 05, 2023

    food

    Comments

    Food -Final

    • 1. ಸುಸ್ಥಿರ ಆಹಾರ ಭದ್ರತೆಗಾಗಿ ಧಾನ್ಯಗಳು ಸುಸ್ಥಿರ ಆಹಾರ ಭದ್ರತೆಗಾಗಿ ಧಾನ್ಯಗಳು ಸಾಧ್ಯತೆಗಳು ಮತ್ತು ಸವಾಲುಗಳು
    • 2. ಆಹಾರ ಭದ್ರತೆ ಎಂದರೆ ಏನು? ಆಹಾರ ಭದ್ರತೆ ಎಂದರೆ ಏನು? ದೇಶದ ಪ್ರಜೆಗೆ / ವ್ಯಕ್ತಿಗೆ ಸರ್ವಕಾಲಿಕವಾಗಿ ತನ್ನನ್ನು ಪೋಷಿಸಿಕೊಳ್ಳಲು ಅನುವಾಗುವ ಸುರಕ್ಷಿತ ಸ್ಥಿತಿ. ಇದು 3 ಅಂಶಗಳನ್ನೊಳಗೊಂಡಿದೆ. 1.ಪೂರೈಕೆ – ಉತ್ಪಾದನೆ ಅಥವಾ ಆಮದು. 2.ಲಭ್ಯತೆ – ಸ್ಥಳೀಯವಾಗಿ ದೊರೆಯುವ ವ್ಯವಸ್ಥೆ. 3.ಕೈಗೆಟಕುವ – ಬೆಲೆ
    • 3. ಆಹಾರ ಸುರಕ್ಷತೆ ಏಕೆ ಬೇಕು? ಆಹಾರ ಸುರಕ್ಷತೆ ಏಕೆ ಬೇಕು? ►ಉಳಿವಿಗಾಗಿ - ದೇಶದಲ್ಲಿ ಯಾವುದೇ ರೀತಿಯ ಪ್ರಾಕೃತಿಕ, ಸಾಮಾಜಿಕ ಅಥವಾ ಆರ್ಥಿಕ ಪರಿಸ್ಥಿತಿಯು ವಿಕೋಪಕ್ಕೆ ತಲುಪಿದಾಗ. ಉದಾ: ಸುನಾಮಿ, ಬರಗಾಲ, ಗಲಭೆ, ಆರ್ಥಿಕ ಕುಸಿತ. ►ನೆರವಿಗಾಗಿ - ದುರ್ಬಲ ವರ್ಗದವರ ಬದುಕಿಗೆ ಆಸರೆಯಾಗಲು / ಆಹಾರ ಭದ್ರತೆ ಒದಗಿಸಲು.
    • 4. ಉದಾಹರಣೆಗೆ, ಬರಪೀಡಿತ ಸನ್ನಿವೇಶ ಉದಾಹರಣೆಗೆ, ಬರಪೀಡಿತ ಸನ್ನಿವೇಶ ►ಒಮ್ಮಿಂದೊಮ್ಮೆಗೆ, ಆಹಾರ ಲಭ್ಯತೆ ಕ್ಷೀಣವಾಗುತ್ತದೆ. ►ಅಹಾರ-ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ►ಮುಂದೆ, ಹಣವಿದ್ದರೂ ಆಹಾರ ದೊರೆಯದೇ ಇರಬಹುದು. ►ಸರಣಿ ಸಾವು ನೋವುಗಳು ಮತ್ತು ರೊಗಗ್ರಸ್ಥತೆ ಉಂಟಾಗುತ್ತದೆ. ►ಉಳಿವಿಗಾಗಿ, ಆಕ್ರಮಣಕಾರಿ ಗುಂಪುಗಳು ಮೂಡಿ, ಆಹಾರಕ್ಕಾಗಿ ಕೊಲೆ, ಆತ್ಮಹತ್ಯೆಗಳು ನಡೆಯಬಹುದು. ►ದೇಶದ ಆಂತರಿಕ ಭದ್ರತೆ ಕಡಿಮೆಯಾಗಿ, ಮುಂದೆ ಬಾಹ್ಯ ಭದ್ರತೆಯೂ ಕಳೆದುಹೋಗಬಹುದು. ►ಅಂತರ್ಯುದ್ಧಕ್ಕೆ (Civil War ಗೆ) ಕಾರಣವಾಗಬಹುದು.
    • 5. ಇದೇ ರೀತಿಯ ಘಟನೆಗಳಿಗೆ ಉದಾಹರಣೆ. ಇದೇ ರೀತಿಯ ಘಟನೆಗಳಿಗೆ ಉದಾಹರಣೆ. ►2011 ನೇ ವರ್ಷದಿಂದ 2015ರ ವರೆಗೆ ಲಿಬಿಯಾ ದೇಶದಲ್ಲಿ ಆದ ಆರ್ಥಿಕ ಕುಸಿತದಿಂದ ಅಲ್ಲಿನ ನಾಗರಿಕರ ಮೇಲೆ ಆದ ದುಷ್ಪರಿಣಾಮ.
    • 6. Slide6 ►ಜಗತ್ತಿಗೆ ಅತ್ಯಂತ ಹೆಚ್ಚು ವಿಶ್ವ ಸುಂದರಿಯರನ್ನು ನೀಡಿರುವ ತೈಲ ವಹಿವಾಟಿನ ರಾಷ್ಟ್ರವಾದ ಲಿಬಿಯಾ 2011ನೇ ಮೇ ತಿಂಗಳಲ್ಲಿ ಎಂದೂ ಕಂಡರಿಯದ ಆಹಾರ ಕೊರತೆಯನ್ನು ಎದುರಿಸಬೇಕಾಯ್ತು. ►ತೈಲ ಬೆಲೆ ಕುಸಿತದಿಂದಾಗಿ, ಹಣದ ಮೌಲ್ಯ ಕಳೆದುಕೊಂಡು, ಆಹಾರ ಆಮದು ಸರಬರಾಜು ನಿಂತೇ ಹೋಯಿತು. ►ಕಂತೆ ಕಂತೆ ಹಣವಿದ್ದರೂ, ಜನರಿಗೆ ಆಹಾರ ಸಿಗಲಿಲ್ಲ. ►ಆಹಾರ ದೋಚಿ ತಿನ್ನುತ್ತಿದ್ದ ಜನರು ಅಂಗಡಿ, ಮಾಲ್, ಗೋದಾಮುಗಳನ್ನು ದೋಚಿ, ಕಿತ್ತು ತಿಂದರೂ, ಕ್ಷಾಮದ ಬಿಸಿ ಆರಲಿಲ್ಲ. ►ಸರಕಾರ ಬಿದ್ದು ಹೊಗಿ, ಜನರನ್ನು ರಕ್ಷಿಸಬೇಕಿದ್ದ ಮಿಲಿಟರಿಯವರೇ ಜನರ ಮೇಲೆ ಗುಂಡುಗಳ ಮಳೆಗರೆಯಬೇಕಾಯ್ತು. ►ಹಲವು ಸಾವುನೋವುಗಳಾಗಿ ಅಮಾಯಕ ಜನ ಹೆಣಗಳಾಗಬೇಕಾಯ್ತು.
    • 7. ಆ ದೇಶ ಮಾಡಿದ ಪ್ರಮಾದವೇನು? [ಯಾಕೆ ಹೀಗಾಯ್ತು?] ಆ ದೇಶ ಮಾಡಿದ ಪ್ರಮಾದವೇನು? [ಯಾಕೆ ಹೀಗಾಯ್ತು?] ►ಕೇವಲ ವ್ಯವಹಾರ, ತಾಂತ್ರಿಕತೆ ಮತ್ತು ಸೌಂದರ್ಯಕ್ಕೆ ಮಾತ್ರ ಬೆಲೆ ನೀಡಿರುವುದು. ►ಕೃಷಿಯನ್ನು ಕಡೆಗಣಿಸಿರುವುದು. ►ಕೃಷಿಯನ್ನು ಮಾಡುವುದು ಸಾಮಾಜಿಕವಾಗಿ ಮಾನ್ಯತೆ ಕಳೆದುಕೊಂಡಿರುವುದು. ►ಶಿಕ್ಷಣ ಮತ್ತು ಸರಕಾರದ ಪ್ರಾಯೋಜಕತ್ವದಲ್ಲಿ ಕೇವಲ Fashion ಗೆ ಮಾತ್ರ ತರಬೇತಿ ನೀಡಿರುವುದು. ►ಸೂಕ್ತ ಪ್ರಮಾಣದಲ್ಲಿ ಆಹಾರ ಆಮದು ಮತ್ತು ದಾಸ್ತಾನು ಸಂಗ್ರಹವಿಲ್ಲದೆ ಹೋಗಿರುವುದು. ►ಪರ್ಯಾಯವಾಗಿ ಸರಕಾರವು ಪರಿಸ್ಥಿತಿಯನ್ನು ನಿಭಾಯಿಸಲು ಯಾವುದೇ ಪೂರ್ವ ಸಿದ್ಧತೆಯಿಲ್ಲದೇ ಹೋಗಿರುವುದು.
    • 8. Slide8 ►ಇತಿಹಾಸ ಕಾಲದಿಂದ ಹಲವು ರಾಜ್ಯಗಳ ಕೋಟೆಗಳಿಗೆ ಮುತ್ತಿಗೆ ಹಾಕಲ್ಪಟ್ಟಾಗ ಒಳಗಿದ್ದ ಜನರು ಮತ್ತು ಸೈನಿಕರು ಕೆಲ ಕಾಲದ ನಂತರ ಆಹಾರವಿಲ್ಲದೆ, ತಮ್ಮ ಬಲ ಉಡುಗಿ ಹೋಗಿ, ವಿಧಿಯಿಲ್ಲದೇ, ಶರಣಾದ ನಿದರ್ಶನಗಳಿವೆ. ►ಸ್ವಾತಂತ್ರ್ಯ ಪೂರ್ವ ಭಾರತದ ಬಂಗಾಳದಲ್ಲಿ 1943 ರಲ್ಲಿ ಉಂಟಾದ ಆಹಾರ ಕ್ಷಾಮದಲ್ಲಿ 30 ಲಕ್ಷ ಜನರು ಸಾವಿಗೀಡಾಗಿರುವುದನ್ನು ಐತಿಹಾಸಿಕ ದಾಖಲೆಗಳಲ್ಲಿ ಕಾಣಬಹುದು
    • 9. ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 1 ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 1 ►ಯಾರು ಸುರಕ್ಷಿತರು? : ►ಸ್ವಂತ ಜಮೀನಿನಲ್ಲಿ ಧಾನ್ಯ ಮತ್ತು ಅಗತ್ಯ ಆಹಾರೊತ್ಪನ್ನಗಳನ್ನು ಬೆಳೆಯುವವರು. ►ಸಾಲದ ಹೊರೆಯಿಲ್ಲದ ರೈತರು ►ಅಹಾರ ದಾಸ್ತಾನು ಮತ್ತು ವಹಿವಾಟು ನಿರ್ವಹಿಸುವ ಮದ್ಯವರ್ತಿಗಳು ►ಪ್ರಸ್ತುತ ಸ್ಥಿತಿಗತಿಲ್ಲಿ, ಉತ್ತಮ ಆದಾಯ ಪಡೆಯುತ್ತಿರುವವರು. ►ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿರುವವರು.
    • 10. ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 2 ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 2 ►ಯಾರು ಅಸುರಕ್ಷಿತರು? : ►ಜಮೀನು ರಹಿತರು ಮತ್ತು ಸಣ್ಣ ಸ್ಥಳದಲ್ಲಿ ಮನೆಮಾಡಿಕೊಂಡವರು ►ಸಣ್ಣ ಸ್ವಾವಲಂಬಿ ಉದ್ಯೋಗಿಗಳು ►ತೀರಾ ಕಡಿಮೆ ಸಂಬಳಕ್ಕೆ ದುಡಿಯುವವರು ►ನಗರವಾಸಿ ಬಿಕ್ಷುಕರು ಮತ್ತು ವಲಸಿಗರು. ►ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ►ವಿಶೇಷ ಸಂದರ್ಭಗಳಲ್ಲಿರುವ ವಲಸಿಗರು, ನಿರಾಶ್ರಿತರು ಮತ್ತು ಪ್ರಕೃತಿ ವಿಕೋಪಕ್ಕೆ ಬಲಿಯಾದ ಪ್ರದೇಶದವರು.
    • 11. Slide11 ►ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಹಸಿರುಕ್ರಾಂತಿಯ ಫಲವಾಗಿ ಹರಿಯಾಣ, ಪಂಜಾಬ್ ಗಳಲ್ಲಿ ಗೋಧಿ ಉತ್ಪಾದನಾ ಸಾಮರ್ಥ್ಯವು 7.23 ಮಿಲಿಯನ್ ಟನ್ ಗಳಿಂದ, 30.33 ಟನ್ ಗಳಿಗೇರಿರುವುದು. ►ತಮಿಳ್ನಾಡು, ಆಂದ್ರಪ್ರದೇಶ ಗಳಲ್ಲಿಯೂ ಭತ್ತದ ಇಳುವರಿ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ►Food Corporation of India [FCI] ಮುಖಾಂತರ ಅಹಾರ ದಾಸ್ತಾನು ಮತ್ತು ಸರಬರಾಜು ಪ್ರಕ್ರಿಯೆ ನಡೆಯುತ್ತಿದೆ. ►ಬೆಂಬಲ ಬೆಲೆಯಲ್ಲಿ ಧಾನ್ಯಗಳನ್ನು ರೈತರಿಂದ ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಅವಶ್ಯಕ ಪ್ರದೇಶಗಳಿಗೆ ಸಹಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿವರದಂತೆ ವಿತರಿಸಲಾಗುತ್ತಿದೆ. ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 3
    • 12. Slide12 ►ಬಡತನ ನಿರ್ಮೂಲನಾ ಯೋಜನೆಗಳು, ಮಧ್ಯಾಹ್ನದ ಊಟ ವ್ಯವಸ್ಥೆಗಳು ಸಹ FCI ಆಹಾರ ದಾಸ್ತಾನು ಲಭ್ಯತೆಯನ್ನು ಅವಲಂಬಿಸಿವೆ. ►ಅಂತ್ಯೋದಯ ಯೋಜನೆ, ಅನ್ನಪೂರ್ಣ ಸ್ಕೀಂ ನಂತಹ ಆಹಾರ ವಿತರಣಾ ವ್ಯವಸ್ಥೆಗಳು ಸಹ ಆಹಾರ ಭದ್ರತೆಯನ್ನು ಒದಗಿಸುವ ಸರಕಾರದ ಯೋಜನೆಗಳಾಗಿವೆ. ಭಾರತದ ಆಹಾರೋತ್ಪಾದನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ಇಂದಿನ ವಾಸ್ತವಿಕ ಸ್ಥಿತಿ. 4
    • 13. ಸಾಧ್ಯತೆಗಳು ಸಾಧ್ಯತೆಗಳು ►ಅಭಿವೃದ್ಧಿಪಡಿಸಿದ ಪೈರು ತಳಿ ಬೀಜಗಳ ಪೂರೈಕೆ ಮತ್ತು ಬಳಕೆ. ►ಇದರಿಂದಾಗಿ ಧಾನ್ಯ ಇಳುವರಿಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ►ರೋಗ ನಿರೋಧಕತೆ ಹೆಚ್ಚಿರುವ ತಳಿಗಳ ಬಳಕೆಯಿಂದ ಮದ್ಯಂತರ ನಿರ್ವಹಣೆಯ ಶ್ರಮ ಕಡಿಮೆ. ►ಕೃಷಿ ಇಲಾಖೆಯ ಮೂಲಕ ಬೀಜಗಳ ಲಭ್ಯತೆಯು ಖಾಸಗಿ ಕಂಪನಿಗಳಿಗಿಂತ ಹೆಚ್ಚು ಭರವಸೆದಾಯಕ. ಇಂದಿಗೂ ಹಲವು ಜನ ರೈತರು ತಮ್ಮದೇ ಬೀಜ ಸಂಗ್ರಹವನ್ನು ಹೊಂದಿರುವುದು ಉತ್ತಮ. ಆದರೆ ಹೆಚ್ಚು ಇಳುವರಿಯಿಲ್ಲದ ಹಳೆಯ ತಲೆಮಾರುಗಳ ಬೀಜಗಳನ್ನೇ ಪುನ: ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಿ ಸುಧಾರಿತ ತಳಿಗಳನ್ನು ಬಳಸುವ ಮೂಲಕ ಸಮಗ್ರ ಇಳುವರಿಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು ನಾವು ಕಾಣಬಹುದು.
    • 14. ಸಾಧ್ಯತೆಗಳು ಸಾಧ್ಯತೆಗಳು ►ಆಧುನಿಕ ಆಹಾರ ಸಂಸ್ಕರಣಾ ಮತ್ತು ಸಂಗ್ರಹಣಾ ಘಟಕಗಳು. ►FCI ನಿಂದ ಸಂಗ್ರಹಿಸಲ್ಪಡುವ ಆಹಾರ ದಾಸ್ತಾನು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ, ಸಂಗ್ರಹಣಾ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದು. ►ಅತ್ಯಾಧುನಿಕ ಸಂಸ್ಕರಣಾ ಘಟಕಗಳಲ್ಲಿ, ಪೈರುಗಳಿಂದ ಧಾನ್ಯಗಳನ್ನು ನೇರವಾಗಿ ಪಡೆಯಬಹುದಾಗಿದ್ದು, ಆಹಾರ ವ್ಯರ್ಥವಾಗಿ ಪೋಲಾಗುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ►ಆಧುನಿಕ ಆಹಾರ ಸಂಸ್ಕರಣೆಯು ಉದ್ದೇಶರಹಿತ ಕಲಬೆರಕೆ (ಆಕಸ್ಮಿಕ ಕಲಬೆರಕೆ) ಯನ್ನು ಇಲ್ಲವಾಗಿಸುತ್ತದೆ.
    • 15. ಸಾಧ್ಯತೆಗಳು ಸಾಧ್ಯತೆಗಳು ►ಸುಧಾರಿತ ಕೃಷಿ ಉಪಕರಣಗಳು. ►ಕೃಷಿಯನ್ನು ತ್ರಾಸದಾಯಕ ಕಾರ್ಯ ಎಂದು ನಾವು ಹಿಂಜರಿಯಬೇಕಾಗಿಲ್ಲ. ►ಉಳುಮೆಗೆ ಟ್ರಾಕ್ಟರ್/ಟಿಲ್ಲರ್ ಗಳ ಲಭ್ಯತೆಯಿದೆ. ►ಕಳೆ ಕೀಳುವ ಯಂತ್ರಗಳಿವೆ. ►ನೀರಾವರಿ ಸಾಧನಗಳಿವೆ ►ಮಣ್ಣು ಗೊಬ್ಬರ ಮತ್ತು ಕೀಟನಾಶಕ ಬಳಕೆಗೆ ಸಾಧನಗಳಿವೆ ►ಕಟಾವು ಯಂತ್ರಗಳಿವೆ
    • 16. ಸಾಧ್ಯತೆಗಳು ಸಾಧ್ಯತೆಗಳು ►ಕೃಷಿ ಸಾಲ, ಸಬ್ಸಿಡಿ ವಿಮೆ ಮತ್ತು ಪರಿಹಾರ ಸೌಲಭ್ಯಗಳು ►ಬಡ್ಡಿರಹಿತ ಇಲ್ಲವೇ, ಕಡಿಮೆ ಬಡ್ಡಿಯ ಸಾಲ ಸೌಲಭ್ಯ ದೊರೆಯುವ ಮೂಲಕ ಹೂಡಿಕೆಗೆ ಅನುಕೂಲ. ►ದುಬಾರಿಯಾದ ಕೃಷಿ ಪರಿಕರಗಳನ್ನು ಸಬ್ಸಿಡಿಯ ಮೂಲಕ ಕಡಿಮೆ ದರದಲ್ಲಿ ಪಡೆಯಲು ಅವಕಾಶಗಳಿವೆ. ►ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಮಾಡುವ ರೈತ ಸ್ನೇಹಿ ಅನುಷ್ಟಾನದಿಂದಾಗಿ ಸಾಲದ ಹೊರೆ ಕಡಿಮೆ ಮಾಡಿ, ಕೃಷಿಯಲ್ಲಿ ಹೆಚ್ಚಿನ ಪ್ರಮಾಣದ ತೊಡಗಿಸಿಕೊಳ್ಳುವಿಕೆಯನ್ನು ಅಪೇಕ್ಷಿಸಬಹುದು. ►ವಿಕೋಪ ಮತ್ತು ಆಕಸ್ಮಿಕಗಳಿಂದ ಬೆಳೆ ನಷ್ಟ ಹೊಂದಿದವರಿಗೆ ಬೆಳೆ ವಿಮೆಯನ್ನು ಒದಗಿಸುವ ಮೂಲಕ ರೈತರ ಮೇಲಾಗುವ ಆರ್ಥಿಕ ಹೊರೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
    • 17. ಸಾಧ್ಯತೆಗಳು ಸಾಧ್ಯತೆಗಳು ►ಮಾರುಕಟ್ಟೆ ಮತ್ತು ಬೆಂಬಲ ಬೆಲೆ. ►ಮದ್ಯವರ್ತಿಗಳಿಲ್ಲದ ನೇರ ಮಾರುಕಟ್ಟೆಯ ಅವಕಾಶ. ►ಧಾನ್ಯಗಳನ್ನು ಸಂಸ್ಕರಿಸಿ, ನೇರವಾಗಿ ಸರಕಾರವೇ ಖರೀದಿಸುವ ಸಾಧ್ಯತೆಯನ್ನು ಪರಿಗಣಿಸಬೇಕು. ►ಯಾವುದೇ ಕೃಷಿಯಲ್ಲಿ ಸಾರ್ವರ್ತ್ರಿಕವಾಗಿ ಮಿತಿಮೀರಿದ ಬೆಳೆ ಉತ್ಪನ್ನ ಲಭಿಸಿದಾಗ, ಸಣ್ಣ ಹಿಡುವಳಿದಾರರಿಗೆ ಆಗಬಹುದಾದ ನಷ್ಟವನ್ನು ಅಂದಾಜುಮಾಡಿ, ಬೆಂಬಲ ಬೆಲೆ, ಪರಿಹಾರಗಳನ್ನು ದೊರೆಯುವಂತೆ ಮಾಡಿದರೆ ಸಹ ರೈತರ ಉಳಿವನ್ನು ಮತ್ತು ಕೃಷಿಯ ಏಳಿಗೆಯನ್ನು ಕಾಣಬಹುದು.
    • 18. ಸಾಧ್ಯತೆಗಳು ಸಾಧ್ಯತೆಗಳು ►ಕೃಷಿ ಇಲಾಖೆಯ ಮುಖಾಂತರ ತಾಂತ್ರಿಕ ಸಹಾಯ, ವೈಜ್ಞಾನಿಕ ಪದ್ಧತಿಗಳಿಗೆ ಸಹಾಯ. ►ಮಣ್ಣು ಪರೀಕ್ಷೆಯ ಮೂಲಕ ಸ್ಥಳದಲ್ಲಿ ಕೃಷಿಯನ್ನು ಮಾಡಲು ಇರುವ ಸೂಕ್ತತೆ ಮತ್ತು ಸಾಧ್ಯತೆಗಳನ್ನು ಮನಗಾಣಬಹುದು. ►ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ, ಯಾವ ಗೊಬ್ಬರವನ್ನು , ಯಾವ ಕಾಲಾನುಕ್ರಮದಲ್ಲಿ ಮತ್ತು ಯಾವ ವಿಧಾನದಲ್ಲಿ ಪೂರೈಸಬೇಕು ಎಂಬ ಮಾಹಿತಿ ಆನ್ಲೈನ್ ಸಾಫ್ಟ್ವೇರ್ಗಳಲ್ಲಿ ನೇರವಾಗಿ ಮೊಬೈಲ್ ಮೂಲಕ ಲಭ್ಯಗೊಳಿಸುವುದೂ ಒಂದು ಸಾಧ್ಯತೆಯಾಗಿದೆ. ►ರೈತರ ಸಹಾಯವಾಣಿಯ ಮೂಲಕ ಸಲಹೆ ಸೂಚನೆಗಳನ್ನು ಪಡೆಯುವುದನ್ನು ಪರಿಣಾಮಕಾರಿಗೊಳಿಸಿ, ಇಂದಿನ ತಾಂತ್ರಿಕ ಜ್ಞಾನವನ್ನು ಸದುಪಯೋಗ ಮಾಡುವುದೂ ಒಂದು ಸಾಧ್ಯತೆ.
    • 19. ಸಾಧ್ಯತೆಗಳು ಸಾಧ್ಯತೆಗಳು ►ಕೃಷಿ ಇಲಾಖೆಯ ಮುಖಾಂತರ ಪ್ರಾತ್ಯಕ್ಷಿಕೆಗಳು, ತರಬೇತಿಗಳು. ►ರೈತ ಸ್ನೇಹಿ ಕಾರ್ಯಕ್ರಮಗಳ ಮೂಲಕ ಮಾದ್ಯಮಗಳಲ್ಲಿ ಮಾಹಿತಿ ಮತ್ತು ಪ್ರೇರಣೆ ಒದಗಿಸುವುದು. ಉದಾ : ಗೆ ಕೃಷಿರಂಗ, ಕೃಷಿ ದರ್ಶನ ಕಾರ್ಯಕ್ರಮಗಳು ►ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಕ್ರಮದ ಮೂಲಕ ಕೇವಲ ಪದ್ಧತಿ ಮತ್ತು ಹಂತಗಳ ಬಗ್ಗೆ ಅಲ್ಲದೆ, ಕೃಷಿಯನ್ನು ಒಂದು ಜೀವನೋಪಾಯವಾಗಿ ತೆಗೆದುಕೊಳ್ಳಬಹುದು ಎಂಬ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡುವ ದಿಟ್ಟ ಕ್ರಮಗಳು ಇಂದಿನ ಮತ್ತು ಮುಂದಿನ ಜನಾಂಗಗಳು ಕೃಷಿಯನ್ನು ತ್ಯಜಿಸದಂತೆ ಕಾಪಾಡಬಲ್ಲವು.
    • 20. ಸಾಧ್ಯತೆಗಳು ಸಾಧ್ಯತೆಗಳು ►ನಗರದಲ್ಲಿ ಕೃಷಿ, - ತಾರಸಿ ಕೃಷಿ, ಮಿನಿಯೇಚರ್ ಕೃಷಿ. ►ಸ್ವಂತ ತಾರಸಿ ಮಾಡು ಹೊಂದಿದವರಿಗೆ, ಆರಂಭಿಸಲು ಪ್ರೇರಣೆ. ಪ್ರಚಾರ ಮತ್ತು ಹವ್ಯಾಸವಾಗಿ ಬೆಳೆಸಲು ಕರೆ. ►ಮಾಲಿನ್ಯ ಕಡಿಮೆ ಮಾಡುವುದಲ್ಲದೆ, ಮಾರುಕಟ್ಟೆಯ ಅವಲಂಬನೆಯನ್ನು ತಕ್ಕ ಮಟ್ಟಿಗೆ ಸರಳಗೊಳಿಸುತ್ತದೆ. ಮನೋರಂಜನೆ, ಮಾನಸಿಕ ನೆಮ್ಮದಿ [ಹಸುರುಮಯತೆಯಿಂದ] ಮತ್ತು ಹವ್ಯಾಸದೊಂದಿಗೆ, ಸಣ್ಣ ಆದಾಯವನ್ನೂ ನೀಡಿ ಪ್ರೇರೇಪಿಸುತ್ತದೆ.
    • 21. ಸಾಧ್ಯತೆಗಳು ಸಾಧ್ಯತೆಗಳು ►ಜೈವಿಕ ತಂತ್ರಜ್ಞಾನದ ಅನ್ವಯ ಮತ್ತು ಅನ್ವೇಷಣೆಗಳು. ►ಅನುವಂಶೀಯವಾಗಿ ಪೊಷಕಾಂಶಗಳನ್ನು ಧಾನ್ಯಬೆಳೆಯಲ್ಲಿಯೇ ಲಭ್ಯವಾಗುವಂತೆ ಮಾಡುವ ಮೂಲಕ, ಕಡಿಮೆ ಆಹಾರ ಸೇವನೆಯಲ್ಲೂ ಎಲ್ಲಾ ಅಗತ್ಯ ಪೊಷಕಾಂಶಗಳು ದೊರೆಯುವಂತೆ ಮಾಡುವುದು ತುರ್ತು ಸಂದರ್ಭಗಳಲ್ಲಿ ಲಾಭದಾಯಕ ಹೆಜ್ಜೆಯಾಗಿದೆ. ►ಅಧಿಕ ಪ್ರಮಾಣದ ದುಬಾರಿ ವಿಧಾನಗಳಿಗಿಂತ, ಜೈವಿಕ ತಂತ್ರಜ್ಞಾನದ ಮೂಲಕ ಸರಳವಾಗಿ, ಅಹಾರ ವಸ್ತುಗಳ ಬಾಳಿಕೆ, ಬೆಳೆಯುವ ಅವಧಿ, ರೋಗ ನಿರೋಧಕ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು, / ಬದಲಾಯಿಸಬಹುದು. ►ಈ ಮೂಲಕ ಇಳುವರಿಯ ಪ್ರಮಾಣದಲ್ಲಿ ಮಾತ್ರವಲ್ಲ, ಗುಣಮಟ್ಟದಲ್ಲಿಯೂ ಹೆಚ್ಚಳವಾಗಬೇಕಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿವೆ.
    • 22. ?? ಸವಾಲುಗಳು ?? ?? ಸವಾಲುಗಳು ?? ►ಪ್ರಸ್ತುತ ಭಾರತದಲ್ಲಿ ಬೆಳೆಯುತ್ತಿರುವ ಹೆಕ್ಟೇರುವಾರು ಸರಾಸರಿಯನ್ನು ಪರಿಗಣಿಸಿದರೆ, ಅದು 1935 ಕೆ. ಜಿ / ಹೆಕ್ಟೇರ್ ಇದೆ. ►ಆದರೆ, ಚೀನಾ 4329 ಕೆ. ಜಿ / ಹೆಕ್ಟೇರ್ ಬೆಳೆಯುತ್ತದೆ ►ಅಮೇರಿಕಾ, ಜನಸಂಖ್ಯೆ ಕಡಿಮೆಯಿದ್ದರೂ, 4040 ಕೆ. ಜಿ / ಹೆಕ್ಟೇರ್ ಬೆಳೆಯುತ್ತದೆ. ►ಇವುಗಳ ಮುಂದೆ ಕೃಷಿ ಪ್ರಧಾನವಾದ ಭಾರತದ ಹೆಕ್ಟೇರುವಾರು ಧಾನ್ಯ ಬೆಳೆಯ ಪ್ರಮಾಣ ಬಹಳ ಕಡಿಮೆ.
    • 23. ಸವಾಲುಗಳು ಸವಾಲುಗಳು ►ವೈಜ್ಞಾನಿಕ / ತಾಂತ್ರಿಕ (ಸಂಬಂಧಿಸಿದ) ಜ್ಞಾನದ ಮತ್ತು ತರಬೇತಿಯ ಕೊರತೆ. ►ತರಬೇತಿಯನ್ನು ಪಡೆದುಕೊಳ್ಳಬೇಕಾದ ಅಗತ್ಯತೆಯನ್ನು ಮನಗಂಡಿಲ್ಲದೇ ಇರುವ ಕಾರಣ ಹಲವು ರೈತರು ತಮ್ಮದೇ ವಿಧಾನದಲ್ಲಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವುದು ಇಳುವರಿಯ ಕೊರತೆಗೆ ಕಾರಣ. ►ತರಬೇತಿ ಪಡೆದ ನಂತರ ಅದರ ಅನುಷ್ಟಾನದಲ್ಲಿ ಇರುವ ತೊಡಕುಗಳು. ಉದಾ: ಗೆ, ಅನುಭವ ಇಲ್ಲದೇ ಮಾಡಿದ ಬದಲಾವಣೆಗಳಿಂದ ಅಚಾತುರ್ಯಗಳಾಗಿ ನಷ್ಟವಾಗುವುದು ಅಥವಾ ಹಾಗೆ ಆಗಬಹುದೆಂಬ ಆತಂಕ. ►ತರಬೇತಿ ನೀಡುವ ನುರಿತವರ ಕೊರತೆ. ಕೃಷಿ ಇಲಾಖೆಯಲ್ಲಿ ಅಧ್ಯಯನಕ್ಕೆ ಸೇರುವವರ ಪ್ರಮಾಣ ಕಡಿಮೆ. ಐಟಿ, ಎಂಜಿನಿಯರಿಂಗ್ ಆಯ್ಕೆ ಮಾಡುವವರು ಹೆಚ್ಚು.
    • 24. ಸವಾಲುಗಳುಸಾಧ್ಯತೆಗಳ ಅನುಷ್ಟಾನದಲ್ಲಿ ಇರಬಹುದಾದ ತೊಡಕು ಅಥವಾ ವಿಫಲತೆಯೇ ಈ ಸವಾಲುಗಳು ಸವಾಲುಗಳು ಸಾಧ್ಯತೆಗಳ ಅನುಷ್ಟಾನದಲ್ಲಿ ಇರಬಹುದಾದ ತೊಡಕು ಅಥವಾ ವಿಫಲತೆಯೇ ಈ ಸವಾಲುಗಳು ►ಜಾಗತೀಕರಣದ ಮತ್ತು ವ್ಯವಹಾರಿಕ ಅಭಿವೃದ್ಧಿಶೀಲತೆಯ ಓಟದ ನಡುವೆ ಜೀವನ ಸುರಕ್ಷತೆಯ ಸವಾಲು. ►ನಗರೀಕರಣ ►ಜನಸಂಖ್ಯೆಯೊಂದಿಗೆ ಬೆಳೆಯುತ್ತಿರುವ ನಗರಗಳು, ಕೈಗಾರಿಕೆಗಳು, ಕಾಂಕ್ರೀಟ್ ಕಾಡುಗಳು. ►ಕೃಷಿ ಭೂಮಿಯ ಉದ್ಯಮೀಕರಣ. ಸೈಟುಗಳು. ►ಮೆಟ್ರೋ ನಿರ್ಮಾಣ, ಉದ್ಯಮಗಳಿಗೆ, ಕೈಗಾರಿಕೆಗಳಿಗೆ ಕೃಷಿ ಭೂಮಿಯ ಸ್ವಾಧೀನಪಡಿಸಿಕೊಳ್ಳುವಿಕೆ.
    • 25. ಸವಾಲುಗಳು ಸವಾಲುಗಳು ►ಉದ್ಯೋಗ ಕ್ಷೇತ್ರ ►ನಗರದ ಉದ್ಯೋಗಾವಕಾಶಕ್ಕೆ ಪೈಪೋಟಿ ಮಾಡುತ್ತಿರುವ ಕಾಲದಲ್ಲಿ ಯುವ ಜನತೆ ಕೃಷಿಯನ್ನು ಸಾರಾಸಗಟವಾಗಿ ತಿರಸ್ಕರಿಸಿರುವಂತೆ ಕಂಡುಬರುತ್ತಿದೆ. ►ಕೃಷಿಯಲ್ಲಿ ನಷ್ಟದ ಅಪಾಯ (risk) ಹೆಚ್ಚು, ಬೆಲೆಯ ಬಗ್ಗೆ ಗ್ಯಾರಂಟಿ ಇಲ್ಲ ಎಂಬ ನೇರ ಅಭಿಪ್ರಾಯ. ಬೆಳೆ ನಾಶವಾದರೆ, ಪರಿಹಾರ ಕೈಸೇರಬಹುದೇ? ಇಲ್ಲವೇ ಎಂಬ ಸಂಶಯ, ಆತಂಕ. ►ಕಚೇರಿ ಕೆಲಸಕ್ಕೆಂದೇ ಇದ್ದಂತೆ ಕಾಣುವ ಶಿಕ್ಷಣ ಕ್ರಮದಲ್ಲಿ ಪದವಿಗಳನ್ನು ಪಡೆದ ನಂತರ ಕೃಷಿ ಮಾಡಿದರೆ ಜನರ ಟೀಕೆ ಸಿದ್ಧವಾಗಿರುತ್ತದೆ ಎಂಬ ಭಯ ►ಜೀವನ ಸಂಗಾತಿ ಆಯ್ಕೆ ಮತ್ತು ಸಂಪಾದನೆಯನ್ನು ಸಾಮಾಜಿಕವಾಗಿ ಗಂಭೀರ ಎಂದು ಪರಿಗಣಿಸುವ ಯುವಜನತೆಗೆ ಇದೊಂದು ಸವಾಲು ►ದುಡಿಯುವ ಹೊಲವಿರುವ ಮನೆಯನ್ನು ಸೇರುವುದಕ್ಕಿಂತ / ಹೊಂದುವುದಕ್ಕಿಂತ ನಗರಕ್ಕೆ ಹತ್ತಿರವಿರುವ ಐಷಾರಾಮಿ ಮನೆಯನ್ನು ಬಯಸುವವರೇ ಹೆಚ್ಚು.
    • 26. ಸವಾಲುಗಳು ಸವಾಲುಗಳು ►ಕೃಷಿ ಆಸ್ತಿ ಮತ್ತು ಜಮೀನು ಮೌಲ್ಯಕ್ಕೂ ವಾಣಿಜ್ಯ ಉದ್ದೇಶದ ಜಮೀನಿಗೂ ಬೆಲೆಯಲ್ಲಿ ವ್ಯತ್ಯಾಸ. ►ಸಾಮಾನ್ಯವಾಗಿ ಅರ್ಥಿಕ ಭದ್ರತೆಯ ದೃಷ್ಟಿಕೋನದಲ್ಲಿ, ಜಮೀನನ್ನು ಮ್ಯುಟೇಶನ್ / ಕನ್ವರ್ಶನ್ ಮಾಡಿದಲ್ಲಿ, ಮಾರಾಟಕ್ಕೆ ಅನುಕೂಲಕರ ಎಂಬ ಲೆಕ್ಕಾಚಾರವು ಕೃಷಿ ಭೂಮಿಯನ್ನೇ ತ್ಯಜಿಸಲಾಗಿ, ವ್ಯವಹಾರ ಅಥವಾ ಇತರ ಉದ್ಯೋಗದಿಂದ ಮಾತ್ರ ಹೆಚ್ಚು ಲಾಭ ಗಳಿಸಬಹುದೆಂಬ ಹುಸಿ ಪ್ರಚೋದನೆ ನೀಡುತ್ತದೆ. ►ಹಳ್ಳಿಗಳಲ್ಲೂ ವಸತಿ ಸಮುಚ್ಚಯಗಳ ವ್ಯಾಪಾರವು ತೀವ್ರಗತಿಯನ್ನು ಪಡೆಯುತ್ತಿರುವುದು ಆತಂಕಕಾರಿ ಅಂಶವಾಗಿದೆ.
    • 27. ಸವಾಲುಗಳು ಸವಾಲುಗಳು ►ಕೌಟುಂಬಿಕ / ಸಾಮಾಜಿಕ / ಶೈಕ್ಷಣಿಕ ಆದ್ಯತೆಗಳು ►ಶ್ರಮ ಜೀವನಕ್ಕೆ ಇರುವ ಗೌರವ ಕಡಿಮೆಯಾಗಿ, ಸುಲಭವಾಗಿ ಮತ್ತು ಆರಾಮವಾಗಿ ಎಲ್ಲವೂ ಲಭ್ಯವಾಗಬೇಕೆಂದು ಬಯಸುವ ಮನೋಧೊರಣೆ. ►ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ ಎಂಬ ತುಲನಾತ್ಮಕ ಲೆಕ್ಕಾಚಾರ. ►ಚಿಕ್ಕ ಕುಟುಂಬಗಳಾಗಿರುವ ಕಾರಣ, ದುಡಿಯುವವರ ಸಂಖ್ಯೆ ಕಡಿಮೆ. ►ಕೆಲಸಗಾರರನ್ನೇ ಅವಲಂಭಿಸಬೇಕಾದ ಅನಿವಾರ್ಯತೆ. ಮತ್ತು ಕೆಲಸಗಾರರ ಕೊರತೆ. ►ನಗರದ ಉದ್ಯೋಗದಲ್ಲಿದ್ದರೆ ಊರಿನಲ್ಲಿ ಹೆಚ್ಚು ಮರ್ಯಾದೆ. ►ಶಿಕ್ಷಣದ ಫಲವಾಗಿ ಕಛೇರಿ ಉದ್ಯೋಗವೇ [White Collar Job] ದೊರೆಯಬೇಕೆಂಬ ಮಾರ್ಗದರ್ಶಿಗಳ ಪರೋಕ್ಷ ಪ್ರೇರಣೆ.
    • 28. ಸವಾಲುಗಳು ಸವಾಲುಗಳು ►FCI ನಂತಹ ಸಂಸ್ಥೆಗಳಿಂದ ಸಂಗ್ರಹಿಸಲ್ಪಟ್ಟ ಆಹಾರ ಧಾನ್ಯಗಳ ಸುರಕ್ಷತೆ ಮತ್ತು ಬಾಳಿಕೆ ►ಗೋದಾಮುಗಳಲ್ಲಿ ಆಹಾರ ಪೋಲಾಗುವುದು ಮತ್ತು ನಷ್ಟವಾಗುವುದು. ►ಸಾಗಾಣಿಕೆ ಮತ್ತು ದಾಸ್ತಾನುಗೊಳಿಸುವಿಕೆಯಲ್ಲಿ ನಿಭಾವಣೆಯಲ್ಲಿನ ದೋಷಗಳು. ►ಧಾನ್ಯ ಸಂಗ್ರಹದ ಅವೈಜ್ಞಾನಿಕ ನಿರ್ವಹಣೆ ►ಸಾಮರ್ಥ್ಯ ಮೀರಿದ ಸಂಗ್ರಹಣಾ ಪರಿಮಾಣ. ►ಅವಧಿ ಮೀರಿದ ಆಹಾರವೂ ವಿಲೇವಾರಿ – ಸರಬರಾಜು ಆಗದೇ ಉಳಿಯುವುದು. ►ಅವೈಜ್ಞಾನಿಕವಾಗಿ ನಿರ್ಮಿಸಿದ ದಾಸ್ತಾನು ಕೊಠಡಿಗಳು.
    • 29. ಸವಾಲುಗಳು ಸವಾಲುಗಳು ►ಅವ್ಯವಹಾರ, ಕಲಬೆರಕೆ ಮತ್ತು ಅಕ್ರಮ ದಾಸ್ತಾನುಗಳು ►ವಿತರಣೆಯಲ್ಲಿ ಅವ್ಯವಹಾರದ ಲೆಕ್ಕಾಚಾರದ ಮೂಲಕ ಫಲಾನುಭವಿಗಳಿಗೆ ವಂಚನೆ. ►ಉದ್ದೇಶಪೂರ್ವಕ ಆಹಾರ ಕಲಬೆರಕೆಯ ಮೂಲಕ ಲಾಭಕೊರತನ ಮತ್ತು ಗುಣಮಟ್ಟದಲ್ಲಿ ಗಣನೀಯ ಮಾರ್ಪಾಟು ಆಗುವ ಮೂಲಕ ರಾಷ್ಟ್ರೀಯ ನಷ್ಟ. ►ಕೃತಕ ಬೆಲೆ ಏರಿಕೆಯನ್ನು ಪ್ರೇರೇಪಿಸುವ ಅಕ್ರಮ ಧಾನ್ಯ ದಾಸ್ತಾನು ಕ್ರಮ. ►ಗುಣಮಟ್ಟವನ್ನು ಕಾಯ್ದುಕೊಳ್ಳುವ ಪರಿಶೀಲನೆಯಲ್ಲಿ ಆಗುವ ಭೃಷ್ಟಾಚಾರವು ಫಲಾನುಭವಿಗಳಲ್ಲಿ ಪೌಷ್ಟಿಕತೆಯ ಕೊರತೆಯನ್ನುಂಟುಮಾಡಬಲ್ಲದು.
    • 30. ತೀರ್ಮಾನ ತೀರ್ಮಾನ ►ಸವಾಲುಗಳೆಷ್ಟೇ ಇದ್ದರೂ, ಆಹಾರ ಭದ್ರತೆಯು ಬಹಳ ಅನಿವಾರ್ಯ. ಹೀಗಾಗಿ ಸವಾಲುಗಳನ್ನು ಮೀರಬೇಕಾಗಿದೆ ಮತ್ತು ಅಭಿವೃದ್ಧಿ - ಸಾಧ್ಯತೆಗಳನ್ನು ಪರಿಗಣಿಸಬೇಕಾಗಿದೆ. ►ಸಂಗ್ರಹಯೊಗ್ಯ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳ, ಯೋಗ್ಯ ವಿಧಾನಗಳ ಮೂಲಕ ಸಂಗ್ರಹಣೆ ಮತ್ತು ವಿತರಣೆ ಅಥವಾ ಮಾರಾಟ – ಕ್ರಮಗಳು ದೇಶದ ಆಹಾರ ಭದ್ರತೆಗೆ ಸಹಕಾರಿ ಮತ್ತು ವಾಸ್ತವಿಕ ಅಗತ್ಯತೆಗಳಾಗಿವೆ.
    • 31. ಉಪಸಂಹಾರ [ಸಮಾಪ್ತಿ ] ಉಪಸಂಹಾರ [ಸಮಾಪ್ತಿ ] ►ಆಹಾರ ಭದ್ರತೆಯೂ ಸೇರಿದಂತೆ, ದೇಶದ ಭದ್ರತೆಗೆ ನೀಡಬೇಕಾದ ಪ್ರಾಶಸ್ತ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಲ್ಲಿ, ಭವಿಷ್ಯ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅಡೆತಡೆಗಳಿಲ್ಲ. ►ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸ್ಥಿರತೆ ಮತ್ತು ಯೊಗ್ಯ ಅಸ್ತಿತ್ವಕ್ಕೆ ಅವಕಾಶ ನೀಡಿದಂತೆ.
    • 32. ಧನ್ಯವಾದಗಳು ►Reference : Agricultural bulletins. BBC News website for History Wikipedia for Libya crisis information Academy of Development Science (ADS) info papers. Text books of Science and Social Science ಧನ್ಯವಾದಗಳು Presentation By: Sri. Johnson Dcunha